‘ನನ್ನ ಜೀವನವೇ ನನ್ನ ಸಂದೇಶ’ ಎಂದು ಗಾಂಧೀಜಿ ಥಟ್ಟನೆ ಹೇಳಿದ್ದು ಅವರೊಳಗಿನ ತತ್ವಜ್ಞಾನಿ ಕಮಡುಕೊಂಡ ವಿನಮ್ರ ಸತ್ಯವಾಗಿತ್ತು. ತಮ್ಮ ಜೀವನದುದ್ದಕ್ಕೂ ಒಳಿತನ್ನೇ ಹುಡುಕಿ, ಒಳಿತನ್ನೇ ರೂಪಿಸಲೆತ್ನಿಸಿದ ಗಾಂಧೀಜಿಯವರ ಧ್ಯಾನಸ್ಥ ಮಾತು, ಬರಹಗಳ ಪ್ರಾತಿನಿಧಿಕ ಸಂಕಲನ ಇದು. ಗಾಂಧೀಜಿ ಓದುಗರೊಡನೆ ನೇರವಾಗಿ ಮಾತಾಡಿರುವ ಸಾವಿರಾರು ಜೀವಂತ ಕಾಣ್ಕೆಗಳ ಈ ಬರಹಗಳು ನಮ್ಮ ಸ್ಥಗಿತ ಆಲೋಚನೆಗಳ ದಿಕ್ಕನ್ನೇ ಬದಲಾಯಿಸಬಲ್ಲವು.